*ಹಲಸುಲಿಗೆ ಬಳಿ ವಾಹನಕ್ಕೆ ಸಿಲುಕಿ ಅಪ್ಪಚ್ಚಿ ಆದ ಕಾಡುಪ್ರಾಣಿ*

ಸಕಲೇಶಪುರ ಹಲಸುಲಿಗೆ ಗ್ರಾಮ ಪಂಚಾಯತಿ ಬಳಿ ಕಾಡು ಪ್ರಾಣಿಯೊಂದು ವಾಹನಕ್ಕೆ ಸಿಲುಕಿ ಅಪ್ಪಚ್ಚಿ ಆಗಿದೆ.
ಇಲ್ಲಿನ ಮರದ ಮಿಲ್ಲು ಫ್ಯಾಕ್ಟರಿ ಬಳಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಚಿರತೆ ಮರಿಯನ್ನು ಹೋಲುವ ಈ ಪ್ರಾಣಿ ಯಾವುದೋ ಅಪರಿಚಿತ ವಾಹನಕ್ಕೆ ಸಿಕ್ಕಿ ಮರಣ ಹೊಂದಿದೆ.
ಕರವೇ ಆಗ್ರಹ
ಈ ಘಟನೆ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು ಇದು ಯಾವ ಕಾಡು ಪ್ರಾಣಿ ಎಂಬುದನ್ನು ತಿಳಿಸಲಿ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ರಮೇಶ್ ಪೂಜಾರಿ ತಿಳಿಸಿದ್ದಾರೆ