: ಮಹಾನಗರ ಪಾಲಿಕೆ ಇಂಜಿನಿಯರ್ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದರೆ ಇಂಜಿನಿಯರ್ ಬಾಗಿಲು ತೆರೆಯದೆ ಬಹಳ ಹೊತ್ತಿನಿಂದ ಸತಾಯಿಸುತ್ತಿದ್ದಾರೆ.
15ಕ್ಕೂ ಅಧಿಕ ಲೋಕಾ ಸಿಬ್ಬಂದಿ ಬೆಳಿಗ್ಗೆ 6 ರಿಂದ ಕಾರ್ಯಾಚರಣೆ ಕೈಗೊಂಡಿದ್ದಾರೆ. ನಾಲ್ಕೈದು ಅಧಿಕಾರಿಗಳು ಹರಸಾಹಸಪಟ್ಟು ಮೇಲೆ ಹತ್ತಿದರೂ ಮನೆಯಲ್ಲಿದ್ದವರು ಕ್ಯಾರೆ ಅನ್ನುತ್ತಿಲ್ಲ. ಬಾಗಿಲು ಬಡಿದರೂ ತೆರೆಯಲಿಲ್ಲ. ಹೀಗಾಗಿ ಅಧಿಕಾರಿಗಳು ಮುಂದೇನು ಮಾಡುವುದೆಂಬ ಯೋಚನೆಯಲ್ಲಿ ನಿಂತಿದ್ದಾರೆ.

